Slide
Slide
Slide
previous arrow
next arrow

ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ ಶಶಿಭೂಷಣ ಹೆಗಡೆ

300x250 AD

ಬೆಂಗಳೂರು: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ದೊಡ್ಮನೆ ಮೊಮ್ಮಗ, ಶಶಿಭೂಷಣ ಹೆಗಡೆ ದೊಡ್ಮನೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.

ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಶಿಭೂಷಣ ಹೆಗಡೆ ದೊಡ್ಮನೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಕೇಂದ್ರ ಸಚಿವರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

300x250 AD

ಶಶಿಭೂಷಣ ಹೆಗಡೆ ಈ ಹಿಂದೆ ಜೆಡಿಎಸ್ ನಿಂದ ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಶಶಿಭೂಷಣ್ ಹೆಗಡೆ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಿದ್ದಂತೆ ಶಿರಸಿ ಸಿದ್ದಾಪುರ ಭಾಗದ ಹಲವಾರು ಅವರ ಅಭಿಮಾನಿಗಳು ಅವರ ಜೊತೆ ಬಿಜೆಪಿ ಪಕ್ಷ ಸೇರ್ಪಡೆಯಾದರು. ವಿನಾಯಕ‌ ಹೆಗಡೆ ಕೊಡಗಿಬೈಲ್, ಆನಂದ ನಾಯಕ್ ಹಿರೆಗುತ್ತಿ, ಕೆ.ಎಂ.ಹೆಗಡೆ ಹೊಳ್ಳಾಡೆ, ಎಂ.ಎಲ್.ಭಟ್ ಉಂಚಳ್ಳಿ, ಸುಬ್ರಾಯ ಹೆಗಡೆ ಸಾಯಿಮನೆ, ರಾಜು ಹೆಗಡೆ ಕಂಚಿಕೈ, ಎಂ.ಎಸ್ ಹೆಗಡೆ ಐನಬೈಲ್, ದೀಪಕ್‌ರೇವಣಕರ್, ಶ್ರೀರಾಮ ಭಟ್, ಬೆಂಡೆಗದ್ದೆ, ವಿನಾಯಕ ಹೆಗಡೆ ತುಡುಗುಣಿ, ಎನ್.ಎಸ್.ಭಟ್ ಮಣದೂರು, ಜಿ.ಎನ್.ಹೆಗಡೆ ಹೂತನ್, ಶ್ರೀಪಾದ ಭಟ್ ಭೈರುಂಭೆ, ಶ್ರೀಧರ ಹೆಗಡೆ ಜಾನ್ಮನೆ, ಶಿವರಾಮ ಹೆಗಡೆ ಬಾಳಗಾರ, ಶ್ರೀಧರ ಹೆಗಡೆ ಬಾಳಗಾರ,‌ಹಿಮಾಕರ ನಿಲ್ಕುಂದ ಮುಂತಾದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

Share This
300x250 AD
300x250 AD
300x250 AD
Back to top